Select Page

DISABILITY ENTREPRENEURSHIP AND LEADERSHIP FOUNDATION – ಕನ್ನಡ

ದೃಷ್ಟಿಕೋನ :

ವಿಕಲಚೇತನರ ಸಾಮರ್ಥ್ಯ ಗುರುತಿಸುವಂತಹ ಪ್ರಪಂಚದ ನಿರ್ಮಾಣ.

ಧ್ಯೇಯ :

ವಿಕಲಚೇತನರ ವ್ಯಕ್ತಿಗಳಿಗೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಮತ್ತು ಕೆಲಸವನ್ನು ನಿರ್ವಹಿಸಲು ಬದ್ಧವಾಗಿರುವುದು.

ಗುರಿ :

ಮುಂಬರುವ 2025 ರ ಇಸವಿ ದೊಳಗೆ ಗದಗ ಮತ್ತು ಹಾವೇರಿ ಜಿಲ್ಲೆಗಳಾದ್ಯಂತ 5000 ವಿಕಲಚೇತನರಿಗೆ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದು.

ಪರಿಣಾಮಗಳು :

  • 239 ವಿಕಲಚೇತನರು ಮತ್ತು 129 ಮಹಿಳೆಯರು ಯಶಸ್ವಿಯಾಗಿ ವಿವಿಧ ಜೀವನೋಪಾಯ ತರಬೇತಿ ಪಡೆದಿದ್ದಾರೆ. ಸಮರ್ಪಕವಾಗಿ ಜೀವನೋಪಾಯದ ಉದ್ಯೋಗದಲ್ಲಿ 69 ವಿಕಲಚೇತನರು ಸೇರಿದಂತೆ ಪೂರ್ಣಾವಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
  • ಗದಗ ಜಿಲ್ಲೆಯ ಡಂಬಳ ಹೋಬಳಿಯಾದ್ಯಂತ 350 ವಿಕಲಚೇತನರು ಕೆವಿಜಿ ಬ್ಯಾಂಕ್ ಸಹಯೋಗದೊಂದಿಗೆ ಹಣಕಾಸಿನ ವ್ಯವಸ್ಥೆಯ ಮೂಲಕ ಬೆಂಬಲಿತರಾಗಿದ್ದಾರೆ.
  • ಮುಂಡರಗಿ ತಾಲೂಕಿನಾದ್ಯಂತ 540 ಜನರಿಗೆ ಕೃಷಿ ವಿಜ್ಞಾನ ಕೇಂದ್ರ ಗದಗ ಕೃಷಿ ವಿಶ್ವವಿದ್ಯಾಲಯ ಧಾರವಾಡ ಸಹಯೋಗದೊಂದಿಗೆ ಜೀವನೋಪಾಯದ ಕೌಶಲ್ಯತೆ ತರಬೇತಿಯನ್ನು ನೀಡಲಾಗಿದೆ.
  • ಪ್ರಾಯೋಗಿಕವಾಗಿ ಮಾದರಿ ಸಮಗ್ರ ಕೃಷಿ ಪದ್ಧತಿ ಮತ್ತು ಸುಸ್ಥಿರ ಗ್ರಾಮೀಣ ಜೀವನೋಪಾಯ ವನ್ನು ಸ್ಥಾಪಿಸಲಾಗಿದೆ.
  • ವಿಕಲಚೇತನರಿಗೆ ಆರ್ಥಿಕ ಮತ್ತು ಸಾಕ್ಷರತೆ ಯೋಜನೆಗಳನ್ನು ರೂಪಿಸುವುದು.
  • ವಿಕಲಚೇತನರ ಮತ್ತು ಮಹಿಳಾ ಸ್ವಸಹಾಯ ಗುಂಪುಗಳು ಸ್ಥಾಪಿಸಿದ ಎಂಎಸ್ಎಂಇ ವಿವರಗಳನ್ನು ಸಶಕ್ತಗೊಳಿಸಲು ಸ್ಥಳ ಆಧಾರಿತ ಮೊಬೈಲ್ ಮಾರಾಟ ಮತ್ತು ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವುದು.

Get a report of all our on field work every month.

You have Successfully Subscribed!

Share This