ವಿಕಲಚೇತನರ ಪ್ರಾತಿನಿಧ್ಯದ ಕೊರತೆಯಿಂದಾಗಿ ವಿಕಲಚೇತನ ವ್ಯಕ್ತಿಗಳು ತಮ್ಮ ಹಕ್ಕುಗಳ ಬಗ್ಗೆ, ಪ್ರಯೋಜನಗಳ ಬಗ್ಗೆ ಮತ್ತು ಸಮಾಜದ ಮಾಹಿತಿಯ ಬಗ್ಗೆ ತಿಳಿದಿರುವುದಿಲ್ಲ ಅಥವಾ ಅದರ ಅರಿವು ಹೊಂದಿರುವುದಿಲ್ಲ.ಈ ಅನಾನುಕೂಲತೆಗಳು ಮತ್ತು ಅಡತಡೆಗಳನ್ನು ಜಯಿಸಲು ಲಭ್ಯವಿರುವ ಯೋಜನೆಗಳು ಮತ್ತು ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಇರುವ ಕಾರ್ಯವಿಧಾನಗಳನ್ನು ವಿಕಲಚೇತನರಿಗೆ ತಿಳಿಸಿಕೊಡಬೇಕು.ಇಂತಹ ಕಾರ್ಯವನ್ನು ಡೀಲ್ ಫೌಂಡೇಶನ್ ಸಂಸ್ಥೆಯು ಜಾಗೃತಿ ಮೂಡಿಸುವುದರ ಮೂಲಕ,ವಿಕಲಚೇತನರ ಸ್ವಸಹಾಯ ಸಂಘ ಮಾಡುವುದರ ಮೂಲಕ ವಿಕಲಚೇತನರಿಗೆ ಮಾಹಿತಿ ಹಕ್ಕಿನ ಬಗ್ಗೆ ಜ್ಞಾನವನ್ನು ಹೆಚ್ಚಿಸುತ್ತಿದ್ದಾರೆ.ಪ್ರತಿ ತಾಲೂಕಿನಲ್ಲಿ ಲವ್ಲಿ ವುಡ್ ಆಫೀಸರ್ಸ್ ವಿಕಲಚೇತನರೊಡನೆ ಕಾರ್ಯನಿರ್ವಹಿಸಿ ಅವರಿಗೆ ಸ್ವಾವಲಂಬನೆ ಜೀವನಕ್ಕಾಗಿ ಸ್ವ ಸಹಾಯ ಸಂಘಗಳ ಮೂಲಕ ಮಾಹಿತಿ ನೀಡಿ ತರಬೇತಿಗಳನ್ನು ನೀಡಿ ಸದೃಢರನ್ನಾಗಿ ಮಾಡುತ್ತಿದ್ದಾರೆ.ಇದರಿಂದ ವಿಕಲಚೇತನರು ಸಮಾಜದಲ್ಲಿ ಸಕ್ರಿಯವಾಗಿ ಸದಸ್ಯರಾಗಲು ಸಾಧ್ಯವಾಗುತ್ತಿದೆ.
ಅಂತಹ ವಿಕಲಚೇತನರ ಸ್ವಸಹ ಸಂಘಗಳಲ್ಲಿ ನೋಡುವುದಾದರೆ ಶಿರಹಟ್ಟಿ ತಾಲೂಕಿನ ಹೊಳಲಾಪುರ ಗ್ರಾಮದ ಸಿದ್ದೇಶ್ವರ ವಿಕಲಚೇತನರ ಸ್ವಸಹಾಯ ಸಂಘವು ಕೂಡ ಒಂದು.ಈ ಸಂಘವನ್ನು ಶಿರಹಟ್ಟಿ ತಾಲೂಕಿನ ಲವ್ಲಿ ವುಡ್ ಆಫೀಸರ್ ಆದ ರೇಖಾ ಮಡ್ಡಿ ಅವರು ಪರಸಾಪುರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಎಲ್ಲಾ ವಿಕಲಚೇತನರ ಮನೆಗಳಿಗೆ ಭೇಟಿ ಮಾಡಿ ಅವರ ಮಾಹಿತಿಯನ್ನು ಪಡೆದುಕೊಂಡು ಅವರಿಗೆ ಸ್ವಸಹಾಯ ಸಂಘದ ಬಗ್ಗೆ ಮತ್ತು ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಮಾಹಿತಿ ಕೊಟ್ಟು ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಹಾಗೂ ಎಲ್ಲಾ ವಿಕಲಚೇತನರ ಮನೆಗಳಿಗೂ ಭೇಟಿ ನೀಡಿ ಮಾಹಿತಿಯನ್ನು ನೀಡಿದರು. ಇದರಿಂದ ಪ್ರೇರಿತಗೊಂಡು ವಿಕಲಚೇತನರು ಸಂಘವನ್ನು ರಚಿಸಿಕೊಳ್ಳಲು ಮುಂದಾದರು. ನಂತರ ರೇಖಾ ಅವರು ವಿಕಲಚೇತನರನ್ನು ಸೇರಿಸಿ ಒಟ್ಟು 13 ಜನರೊಂದಿಗೆ ಸಂಘವನ್ನು ರಚಿಸಿಕೊಂಡರು. ಅದಕ್ಕೆ “ಸಿದ್ದೇಶ್ವರ ವಿಕಲಚೇತನ ಸ್ವಸಹಾಯ ಸಂಘ” ಎಂದು ಹೆಸರಿಟ್ಟು ಎಲ್ಲ ದಾಖಲಾತಿಯೊಂದಿಗೆ ರೇಖಾ ಅವರು ಈ ಸಂಘದ ಖಾತೆಯನ್ನು ಒಳಲಾಪುರ ಗ್ರಾಮದ ಕೆವಿಜಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು.
ಹೀಗೆ ಎಲ್ಲ ವಿಕಲಚೇತನರು ಪ್ರತಿ ತಿಂಗಳು 300 ರೂಪಾಯಿ ಉಳಿತಾಯವನ್ನು ತುಂಬಲು ತೀರ್ಮಾನಿಸಿದರು.ನಂತರ ಈ ಸಂಘಕ್ಕೆ ರೇಖಾ ಅವರು 2016ರ ಡಿಸ್ಬಿಲಿಟಿ ಅವೆರ್ನೆಸ್ ತರಬೇತಿ,ಬುಕ್ ರೈಟಿಂಗ್ ತರಬೇತಿ,ಫೈನಾನ್ಸಿಯಲ್ ಲೀಡರ್ಶಿಪ್ ತರಬೇತಿಯನ್ನು ನೀಡಿದರು.ಎಲ್ಲ ಸದಸ್ಯರು ಯಾವುದೇ ಅಡಚಣೆ ಬರದ ಹಾಗೆ ತರಬೇತಿಗಳನ್ನು ಪಡೆದುಕೊಂಡು ಸಂಘವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ನಂತರ ಉದ್ಯೋಗದ ತರಬೇತಿಗಳ ಬಗ್ಗೆ ರೇಖಾ ಅವರು ಮಾಹಿತಿಯನ್ನು ನೀಡಿದರು.ಅದು ನಿಮ್ಮ ಸಂಘದಿಂದ ಸಾಲವನ್ನು ಪಡೆದುಕೊಂಡು ಆಸಕ್ತಿ ಇರುವ ಉದ್ಯೋಗವನ್ನು ಮಾಡಿ ಸ್ವಾವಲಂಬಿಗಳಾಗಿ ಬದುಕಿ ಎಂದು ಸ್ಪೂರ್ತಿಯನ್ನು ನೀಡಿದರು.ಅದರಂತೆ ಸಂಘದ ಸದಸ್ಯರು ಬ್ಯಾಂಕ್ ಲೋನ್ ಪಡೆದುಕೊಳ್ಳಲು ಸಮಯ ಬೇಕಾಗುತ್ತದೆ ಅದಕ್ಕೆ ನಮ್ಮ ಸಂಘದ ಉಳಿತಾಯದಿಂದ ಮೊದಲು ನಾವು ಸಾಲವನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡಗುಣ ಎಂದು ಮೀಟಿಂಗ್ ನಲ್ಲಿ ಎಲ್ಲ ಸದಸ್ಯರು ಚರ್ಚೆ ಮಾಡಿದರು. ಅದರಂತೆ ಮೊದಲು ಅವಶ್ಯಕತೆ ಇರುವ ಸದಸ್ಯರಿಗೆ ಉಳಿತಾಯದಿಂದ ಸಾಲವನ್ನು ನೀಡಿದರು.ಅದರಲ್ಲಿ ಸಂತೋಷ್ ಗುಂಜಳ್ ಇವರು ಹತ್ತು ಸಾವಿರ ಸಾಲವನ್ನು ಪಡೆದುಕೊಂಡು ಕಿರಾಣಿ ಅಂಗಡಿ ಹಾಕಿ ತಮ್ಮ ಉದ್ಯೋಗವನ್ನು ಆರಂಭಿಸಿದರು.ಹಾಗೆ ಪ್ರಕಾಶ್ ಕಂಬಳಿ ಇವರು ಕೂಡ 10,000 ಲೋನ್ ಪಡೆದುಕೊಂಡು ಕೃಷಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.ಹೀಗೆ ಸದಸ್ಯರು ಸಾಲವನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡಗುವುದನ್ನು ಕಂಡು ಉಳಿದ ಸದಸ್ಯರು ಉದ್ಯೋಗದಲ್ಲಿ ತೊಡಗಲು ಆಸಕ್ತಿಯನ್ನು ಹೊಂದಿದರು.ಅದಕ್ಕಾಗಿ ಎಲ್ಲ ಸದಸ್ಯರು ಬ್ಯಾಂಕ್ ಲೋನ್ ತೆಗೆದುಕೊಳ್ಳಲು ಮುಂದಾದರು.
ಹೀಗೆ ಈ ಸಂಘ ರಚನೆಯಾಗಿ ಒಂದು ವರ್ಷ ಆದ ನಂತರ ಎಲ್ಲ ಸದಸ್ಯರು ಒಪ್ಪಿಗೆಯಂತೆ ರೇಖಾ ಅವರು ಬ್ಯಾಂಕ್ ಲೋನ್ ಪಡೆಯಲು ಎಲ್ಲ ಸದಸ್ಯರ ದಾಖಲಾತಿಯನ್ನು ಹೊಂದಿಸಿ ಲೋನ್ ಅರ್ಜಿಯೊಂದಿಗೆ ಪ್ರತಿ ಸದಸ್ಯರ ಆಸಕ್ತಿ ಉದ್ಯೋಗದ ಬಗ್ಗೆ ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿದರು. ಅದರಂತೆ ಈ ಸಂಘದ ಉಳಿತಾಯ ಮತ್ತು ಎಲ್ಲಾ ದಾಖಲಾತಿಯನ್ನು ಗಮನಿಸಿ ಸಂಘಕ್ಕೆ 1 ಲಕ್ಷ ಲೋನ್ ಸಂಕ್ಷನ್ ಮಾಡಿದರು.ಈ ಲೋನ್ ಅನ್ನು ಸಂಘದ ಸದಸ್ಯರಲ್ಲಿ ಒಟ್ಟು ಐದು ಜನ ತೆಗೆದುಕೊಂಡಿದ್ದಾರೆ.ಅದರಲ್ಲಿ ಮಹದೇವಪ್ಪ ಡೊಂಕಬಳ್ಳಿ ಇವರು 15 ಸಾವಿರ ಸಾಲವನ್ನು ಪಡೆದುಕೊಂಡು ಕುರಿ ಸಾಕಾಣಿಕೆ ಉದ್ಯೋಗವನ್ನು ಆರಂಭಿಸಿದ್ದಾರೆ.ಇದರಿಂದ ಇವರ ಆರ್ಥಿಕ ಜೀವನಕ್ಕೆ ಸಹಾಯಕವಾಗಿದೆ.ಅದೇ ರೀತಿ ನೀಲನಗೌಡ ಪಾಟೀಲ್ ಇವರು ಕೂಡ ಹೈನುಗಾರಿಕೆ ಉದ್ಯೋಗ ಮಾಡಲು 20 ಸಾವಿರ ಲೋನ್ ತೆಗೆದುಕೊಂಡು ಕುಟುಂಬದವರಿಂದ ಸಹಾಯ ಪಡೆದುಕೊಂಡು ಉದ್ಯೋಗ ಆರಂಭಿಸಿದ್ದಾರೆ.ಅದೇ ರೀತಿ ಸೋಮಪ್ಪ ರಾಮಗಿರಿ ಇವರು ಕೂಡ 20,000 ಲೋನ್ ಪಡೆದುಕೊಂಡು ಹೈನುಗಾರಿಕೆ ಉದ್ಯೋಗ ಮಾಡುತ್ತಿದ್ದಾರೆ. ಹಾಗೆ ಸುರೇಶ್ ಹೊನಕೇರಿ ಇವರು ಕೂಡ ಕಿರಾಣಿ ಅಂಗಡಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಲು 20 ಸಾವಿರ ಲೋನ್ ಪಡೆದುಕೊಂಡು ಉದ್ಯೋಗದಲ್ಲಿ ಮುಂದುವರೆದಿದ್ದಾರೆ.ಹಾಗೆ ಪ್ರಕಾಶ್ ಕಂಬಳಿ ಇವರು ಕೂಡ ಕೃಷಿಗಾಗಿ 25,000 ಸಾಲವನ್ನು ಪಡೆದುಕೊಂಡು ಉದ್ಯೋಗ ಮಾಡುತ್ತಿದ್ದಾರೆ.
ಹೀಗೆ ಎಲ್ಲ ಸದಸ್ಯರು ತಮ್ಮ ಸ್ವಯಂ ಉದ್ಯೋಗದಲ್ಲಿ ತೊಡಗಿ ಆರ್ಥಿಕ ಜೀವನದಲ್ಲಿ ಸುಧಾರಣೆ ಹೊಂದುತ್ತಿದ್ದಾರೆ.ಈ ಸಾಲವನ್ನು ಯಾವುದೇ ರೀತಿಯ ಕಟ್ಟು ಬಾಕಿ ಉಳಿಸದೆ ಪ್ರತಿ ತಿಂಗಳು ಸಾಲ ಮರುಪಾವತಿ ಮಾಡಿ ಈ ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ವಿಕಲಚೇತನರು ಮುಂದುವರೆದಿದ್ದಾರೆ.
ಹೀಗೆ ಎಲ್ಲ ವಿಕಲಚೇತನರು ಡೀಲ್ ಫೌಂಡೇಶನ್ ಸಂಸ್ಥೆ ವತಿಯಿಂದ ತರಬೇತಿಯನ್ನು ಪಡೆದುಕೊಂಡು ಉದ್ಯೋಗ ಮಾಡಿ ಆರ್ಥಿಕವಾಗಿ ಮುಂದೆ ಬರುತ್ತಿದ್ದಾರೆ.ಇವರ ಈ ಆಸಕ್ತಿಗೆ ಡೀಲ್ ಫೌಂಡೇಶನ್ ಸಂಸ್ಥೆಯು ಕಾರಣ ಎಂದು ಹೇಳಬಹುದು.ಅದಕ್ಕಾಗಿ ಸಂಘದ ಸದಸ್ಯರೆಲ್ಲರೂ ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಅದು ವಿಕಲಚೇತನರಾಗಿ ಇಂಥಹ ಒಂದು ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ.ಅದರಲ್ಲಿ ರೇಖಾ ಮೇಡಂ ಅವರು ಪ್ರತಿ ಮನೆಮನೆಗಳಿಗೂ ಭೇಟಿ ನೀಡಿ ಮಾಹಿತಿಯನ್ನು ನೀಡಿ ನಮ್ಮನ್ನು ಗುರುತಿಸಿ ಸಂಘವನ್ನು ರಚಿಸಿ ಕೊಟ್ಟರು. ಇದರಿಂದ ನಮ್ಮನ್ನು ನಾವು ಗುರುತಿಸಿಕೊಳ್ಳುವಂತಾಗಿದೆ ಹಾಗೆ ರೇಖಾವರು ಎಲ್ಲ ಮಾಹಿತಿಯನ್ನು ನೀಡಿ ತರಬೇತಿಗಳನ್ನು ನೀಡಿದರು.ಈ ರೀತಿ ಉಳಿತಾಯ ಮಾಡುವುದರಿಂದ ಮುಂದಿನ ನಮ್ಮ ಮಕ್ಕಳ ಭವಿಷ್ಯಕ್ಕೆ ಅಲ್ಪ ಪ್ರಮಾಣದಲ್ಲಿ ಆದರೂ ಸಹಾಯಕವಾಗುತ್ತಿದೆ.ಜೊತೆಗೆ ನಮಗೆ ತರಬೇತಿ ನೀಡಿ ಉದ್ಯೋಗದಲ್ಲಿ ತೊಡಗುವಂತೆ ಬೆಂಬಲ ನೀಡಿದ್ದಾರೆ.ಇಷ್ಟೆಲ್ಲ ಸಹಕಾರ ನೀಡುತ್ತಿರುವ ಡೀಲ್ ಫೌಂಡೇಶನ್ ಸಂಸ್ಥೆಗೂ ಹಾಗೂ ರೇಖಾ ಅವರಿಗೂ ನಮ್ಮ ಸಂಘದ ಸದಸ್ಯರೆಲ್ಲರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ.ಹೀಗೆ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡಿ ನಮ್ಮಂತಹ ವಿಕಲಚೇತನರನ್ನು ಗುರುತಿಸಿ ಅವರನ್ನು ಬೆಳೆಸಿ ಸಂಸ್ಥೆಯು ಬೆಳೆಯಲಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ರೀತಿಯಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಾಗಿ ಪ್ರತಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸಿ ವಿಕಲಚೇತನರ ಏಳಿಗೆಗಾಗಿ ಲವ್ಲಿ ವುಡ್ ಆಫೀಸರ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಇನ್ನು ಹೆಚ್ಚಿನ ಮಟ್ಟದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆ ಬೆಳೆಯಲಿ ಎಂದು ಎಲ್ಲ ವಿಕಲಚೇತನ ಮತ್ತು ಮಹಿಳೆಯರು ಹಾರೈಸುತ್ತಿದ್ದಾರೆ.
ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿರಿ.
ಧನ್ಯವಾದಗಳು