Empower Abilities, Change Lives

Your support helps us create a world where abilities shine beyond disabilities. Every donation provides essential resources, education, and opportunities for individuals to thrive. Together, we can break barriers and build a more inclusive future.

Donate Now & Make a Difference!

World where ability, not disability, matters

ಜೈ ಶ್ರೀ ರಾಮ್ ವಿಕಲಚೇತನರ ಸ್ವಸಹಾಯ ಸಂಘದ ಕೇಸ್ ಸ್ಟಡಿ

 

ವಿಕಲಚೇತನ ಉದ್ಯಮಶೀಲತೆ ಮತ್ತು ನಾಯಕತ್ವ ಸಿಬ್ಬಂದಿಗಳು ಗದಗ್ ಜಿಲ್ಲೆಯ ಆದಂತ ವಿಕಲಚೇತನರ ಮತ್ತು ಮಹಿಳೆಯರನ್ನು ಗುರುತಿಸಲು 2023 ರಲ್ಲಿ ಪ್ರಚಾರ ಕ್ರಮವನ್ನು ಕೈಗೊಂಡರು. ಇದರಿಂದ ವಿಕಲಚೇತನತೆ ನಿರಂತರ ಸಮಸ್ಯೆಯಾಗಿ ಕಂಡುಬಂದಿದೆ ಎಂದು ತಿಳಿದುಬಂದಿತು.ಜೊತೆಗೆ ಅನೇಕ ವಿಕಲಚೇತನರು ಶಿಕ್ಷಣ, ಅವಕಾಶ,ಉದ್ಯೋಗಗಳಲ್ಲಿ ವಂಚಿತರಾಗಿದ್ದಾರೆ ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಅವಕಾಶ ಸಿಕ್ಕರೆ ಈ ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಂತೆ ಆಗುತ್ತಾರೆ.

ಇದನ್ನೆಲ್ಲಾ ಸಮೀಕ್ಷೆ ಮೂಲಕ ತಿಳಿದುಕೊಂಡು ಡೀಲ್ ಫೌಂಡೇಶನ್ ಸಂಸ್ಥೆಯು ಗ್ರಾಮೀಣ/ನಗರ ಮತ್ತು ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಹಾಗೂ ನಿರುದ್ಯೋಗ ಯುವಕ ಯುವತಿಯರಿಗೆ ಸ್ವಾವಲಂಬನೆ ಜೀವನವನ್ನು ಕಟ್ಟಿಕೊಳ್ಳಲು ಸದೃಢ ಭಾವನೆಗಳಿಂದ ಎಲ್ಲಾ ಕ್ರಿಯಾಶೀಲ ಚಟುವಟಿಕೆಗಳಲ್ಲಿ ವಿಕಲಚೇತನರ ಮತ್ತು ಮಹಿಳೆಯರು ತೊಡಗಿ ಕೊಳ್ಳುವಂತೆ ಮಾಡಬೇಕು ಎಂಬ ಉದ್ದೇಶವನ್ನು ಡೀಲ್ ಫೌಂಡೇಶನ್ ಸಂಸ್ಥೆಯು ಹೊಂದಿತು.

ಆ ಉದ್ದೇಶದಂತೆ ಪ್ರತಿ ತಾಲೂಕಿನಲ್ಲಿ ಲವ್ಲಿವುಡ್ ಆಫೀಸರ ಅನ್ನು ನೇಮಿಸಿ ವಿಕಲಚೇತನರು ಮತ್ತು ಮಹಿಳೆಯರನ್ನು ಗುರುತಿಸಿ ಸರ್ವೇ ಮಾಡಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಅದರಿಂದ ಸ್ವಸಹಾಯ ಸಂಘವನ್ನು ರಚಿಸಿ ಅವರಿಗೆ ಉದ್ಯೋಗದ ಎಲ್ಲಾ ತರಬೇತಿಗಳನ್ನು ನೀಡಿ ಸ್ವಾವಲಂಬನೆ ಜೀವನಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ.ಅಂತಹ ಸ್ವಸಹಾಯ ಸಂಘಗಳಲ್ಲಿ ಹೇಳುವುದಾದರೆ ಮುಂಡರಗಿ ತಾಲೂಕಿನ ಕದಂಪೂರು ಗ್ರಾಮದ ಸಿಂಟರಾಯನಕೇರಿ ಹಳ್ಳಿ “ಜೈ ಶ್ರೀ ರಾಮ ವಿಕಲಚೇತನ ಸ್ವಸಹಾಯ ಸಂಘ” ಕೂಡ ಒಂದು.

ಈ ಸಂಘದ ಬಗ್ಗೆ ನೋಡುವುದಾದರೆ ಮುಂಡರಗಿ ತಾಲೂಕಿನ ಲವ್ಲಿ ಹುಡ್ ಆಫೀಸರ್ ಆದರೆ ರೇಣುಕಾ ಕಲ್ಲಹಳ್ಳಿ ಇವರು ಡೀಲ್ ಫೌಂಡೇಶನ್ ಸಂಸ್ಥೆ ಸ್ವ ಆರಂಭ ಉದ್ಯೋಗ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೇವಕ್ಕ ತಳವಾರ್ ಇವರ ಸಂಬಂಧಿಕರಿಂದ ರೇಣುಕಾ ಅವರು ಸಿಂಟರಾಯನಕೇರಿ ಹಳ್ಳಿಗೆ ಬರುವ ವಿಕಲಚೇತನರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.ನಂತರ ಅವರನ್ನು ಭೇಟಿಯಾಗಿ ಅಲ್ಲಿ ಒಟ್ಟು 15 ಜನ ವಿಕಲಚೇತನರು ಅಷ್ಟೇ ಇದ್ದಾರೆ ಅದರಲ್ಲಿ ಹೆಚ್ಚಾಗಿ ಬುದ್ಧಿಮಾಂದ್ಯತೆ ಹೊಂದಿದ ಮಕ್ಕಳು ಇದ್ದಾರೆ ಆ ಮಕ್ಕಳ ತಾಯಂದಿರನ್ನು ಸೇರಿಸಿಕೊಂಡು ರೇಣುಕಾ ಅವರು ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಅವರಿಗೆ ಸ್ವಸಹಾಯ ಸಂಘದ ಬಗ್ಗೆ ಮಾಹಿತಿ ನೀಡಿ ಸಂಘವನ್ನು ರಚಿಸುವಂತೆ ಮಾಡಿದರು. ನಂತರ 10 ಜನರೊಂದಿಗೆ ಸಂಘ ರಚಿಸಿ ಅದಕ್ಕೆ “ಜೈ ಶ್ರೀರಾಮ್ ವಿಕಲಚೇತನ ಸ್ವಸಹಾಯ ಸಂಘ” ಎಂದು ಹೆಸರಿಟ್ಟು ಕದಂಪುರ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಈ ಸಂಘದ ಖಾತೆಯನ್ನು ತೆರೆಯಲು ಹೋದಾಗ ಅಲ್ಲಿ ಮ್ಯಾನೇಜರ್ ಮಕ್ಕಳು ಬುದ್ಧಿಮಾಂದ್ಯತೆ ಇದ್ದಾರೆ.ಮುಂದೆ ಇವರಿಗೆ ಸಾಲ ಕೊಟ್ಟರೆ ಮುಂದೆ ಯಾರು ಕಟ್ಟುತ್ತಾರೆ ಎಂದು ಖಾತೆ ತೆರೆಯಲು ಅವಕಾಶ ಕೊಡಲಿಲ್ಲ.ರೇಣುಕಾ ಅವರು ಎಷ್ಟೇ ಪ್ರಯತ್ನ ಮಾಡಿದರು ಮ್ಯಾನೇಜರ್ ಒಪ್ಪಿಕೊಳ್ಳಲಿಲ್ಲ ನಂತರ ಮೇವುಂಡಿ ಗ್ರಾಮದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯ ವತಿಯಿಂದ ವಿಕಲಚೇತನರಿಗಾಗಿ ಸುರಕ್ಷತೆ ಕೋ ಆಪರೇಟಿವ್ ಸೊಸೈಟಿಯನ್ನು ಆರಂಭಿಸಿದ್ದಾರೆ.ಅಲ್ಲಿ ಈ ಸಂಘದ ಖಾತೆಯನ್ನು ತೆರೆದರು ಪ್ರತಿ ತಿಂಗಳು ತಮ್ಮ ಹಳ್ಳಿಯಿಂದ ಮೇಯುಂಡಿಗೆ ಬಂದು ಉಳಿತಾಯವನ್ನು ಕಟ್ಟುತ್ತಿದ್ದಾರೆ.

ನಂತರ ಈ ಸಂಘಕ್ಕೆ ರೇಣುಕಾ ಅವರು ಬುಕ್ ರೈಟಿಂಗ್ ತರಬೇತಿ.ಲೀಡರ್ಷಿಪ್ ತರಬೇತಿ,2016ರ ಡಿಸಿಬಿಲಿಟಿ ಅವೆರ್ನೆಸ್ ತರಬೇತಿ, ಉದ್ಯೋಗದ ಮಾಹಿತಿ ಹಾಗೂ ಸರ್ಕಾರದ ಅನೇಕ ಇಲಾಖೆಗಳಿಂದ ಸಿಗುವ ಮಾಹಿತಿಯನ್ನು ಈ ಸಂಘಕ್ಕೆ ರೇಣುಕಾ ಅವರು ನೀಡಿದರು. ಉದ್ಯೋಗದ ಬಗ್ಗೆ ಮಾಹಿತಿ ಪಡೆದುಕೊಂಡ ಸದಸ್ಯರೆಲ್ಲರೂ ಆರು ತಿಂಗಳು ಆದ ನಂತರ ಲೋನ್ ತೆಗೆದುಕೊಂಡು ಉದ್ಯೋಗ ಮಾಡಿ ನಮ್ಮ ಮಕ್ಕಳ ಜೀವನಕ್ಕೆ ಅನುಕೂಲವಾಗುವಂತೆ ಮಾಡೋಣ ಎಂದು ಎಲ್ಲ ಸದಸ್ಯರು ತೀರ್ಮಾನಿಸಿದರು.

ಅದರಂತೆ ಆರು ತಿಂಗಳ ಆದ ನಂತರ ಎಲ್ಲ ಸದಸ್ಯರು ಬ್ಯಾಂಕ್ ಲೋನ್ ಗಾಗಿ ಅರ್ಜಿ ಸಲ್ಲಿಸಿದರು.ಎಲ್ಲ ದಾಖಲೆಗಳನ್ನು ರೇಣುಕಾ ಅವರು ರೆಡಿ ಮಾಡಿ ಈ ಸಂಘಕ್ಕೆ ಸಂರಕ್ಷಣೆ ವಿಕಲಚೇತನ ಕೋ ಆಪರೇಟಿವ್ ಸೊಸೈಟಿಯಲ್ಲಿ 50,000/- ಲೋನ್ ಪಡೆದುಕೊಂಡರು.ಸಂಘದ ಸದಸ್ಯರಲ್ಲಿ ಐದು ಜನ ತೆಗೆದುಕೊಂಡು ಉದ್ಯೋಗ ಮಾಡುತ್ತಿದ್ದಾರೆ.ಆ ಐದು ಜನ ಸದಸ್ಯರಾದ ಮುತ್ತವ್ವ ಪೂಜಾರ ಇವರ ಮಗಳು ಬುದ್ಧಿಮಾಂದ್ಯತೆ ಹೊಂದಿದ್ದಾರೆ. ಈ ಲೋನ್ ಪಡೆದು ಉದ್ಯೋಗ ಮಾಡಿದರೆ ಅದು ಅವರ ಮುಂದಿನ ಜೀವನಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಕ್ಕಳ ಹೆಸರಿನಲ್ಲಿ ಮುತ್ತವ್ವ ಅವರು ದುಡಿದು ಹಣವನ್ನು ಕೂಡ ಇಡುತ್ತಿದ್ದಾರೆ.ಮುತ್ತವ್ವ ಅವರು 5000 ಲೋನ್ ಪಡೆದುಕೊಂಡು ಟಗರು ಮರಿ ಸಾಕಾಣಿಕೆ ಉದ್ಯೋಗ ಮಾಡುತ್ತಿದ್ದಾರೆ.ಇದರಿಂದ ಅವರ ಆರ್ಥಿಕವಾಗಿ ಮುಂದೆ ಬರಲು ಅನುಕೂಲವಾಗುತ್ತದೆ. ಅದೇ ರೀತಿ ಗಾಯತ್ರಿ ಗುರುವಿನ ಇವರು ದೈಹಿಕ ವಿಕಲಚೇತನತೆ ಹೊಂದಿದ್ದು ನಾನು ಕೂಡ ಕೆಲಸ ಮಾಡಬಲ್ಲೆ ಎಂದು ಗುರುತಿಸಿಕೊಳ್ಳಲು 5,000 ಲೋನ್ ಪಡೆದುಕೊಂಡು ಮನೆಯ ಮುಂದೆ ಚಿಕ್ಕದಾಗಿ ಪೆಟ್ಟಿ ಶಾಪ್ ಇಟ್ಟು ತಮ್ಮ ಉದ್ಯೋಗವನ್ನು ಮಾಡುತ್ತಿದ್ದಾರೆ.ಇದರಿಂದ ಉಳಿದ ವಿತರಚೇತನರಿಗೆ ಮಾದರಿಯಾಗಿದ್ದಾರೆ.ಅದೇ ರೀತಿ ಗೌರವ ಪಾಟೀಲ್ ಇವರು ಕೂಡ 25,000 ಲೋನ್ ಪಡೆದುಕೊಂಡು ಹೂವಿನ ವ್ಯಾಪಾರ ಮಾಡುತ್ತಿದ್ದಾರೆ. ಇವರದ್ದು ಬಡತನ ಕುಟುಂಬ ಕುಟುಂಬ ಮಗ ಬುದ್ಧಿಮಾಂದ್ಯತೆ ಹೊಂದಿದ್ದು ಮಕ್ಕಳಿಗಾಗಿ ತಂದೆ ತಾಯಿ ದುಡಿದು ಅವರ ಮುಂದಿನ ಭವಿಷ್ಯಕ್ಕೆ ದಾರಿ ಮಾಡುತ್ತಿದ್ದಾರೆ.ಅದೇ ರೀತಿ ಇರವ್ವ ಕಣಿವಿ ಇವರು ಕೂಡ 5000 ಪಡೆದುಕೊಂಡು ಹೈನುಗಾರಿಕೆಗಾಗಿ ಆಹಾರವನ್ನು ಪಡೆದು ಕೃಷಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

ಈ ರೀತಿಯಾಗಿ ಸಂಘದ ಸದಸ್ಯರು ಲೋನ್ ಪಡೆದುಕೊಂಡು ಉದ್ಯೋಗ ಮಾಡುತ್ತಿದ್ದಾರೆ.ಇವರೆಲ್ಲರೂ ಡೀಲ್ ಫೌಂಡೇಶನ್ ವತಿಯಿಂದ ಅನೇಕ ಇಲಾಖೆಯ ತರಬೇತಿಯನ್ನು ಪಡೆದುಕೊಂಡಿದ್ದಾರೆ. ವಿಕಲಚೇತನರ ಸಂಘದ ಸದಸ್ಯರು ಮತ್ತು ಮಕ್ಕಳ ತಾಯಂದಿರು ಇಷ್ಟೆಲ್ಲ ಅನುಕೂಲತೆಗಳನ್ನು ಪಡೆದುಕೊಂಡು ಸಂಸ್ಥೆಯ ಬಗ್ಗೆ ಮತ್ತು ಸಂಘದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಅದು ಮೊದಲು ನಮ್ಮದು ಚಿಕ್ಕ ಹಳ್ಳಿ ಇಲ್ಲಿ ಹೆಚ್ಚಿನ ಮಕ್ಕಳು ಬುದ್ಧಿಮಾಂದ್ಯತೆ ಹೊಂದಿದ್ದಾರೆ ಇವರನ್ನು ಯಾರು ಗುರುತಿಸಲಿಲ್ಲ ಆದರೆ ಡೀಲ್ ಫೌಂಡೇಶನ್ ವತಿಯಿಂದ ರೇಣುಕಾ ಅವರು ನಮ್ಮನ್ನು ಗುರುತಿಸಿ ಮಕ್ಕಳಿಗೆ ಅನುಕೂಲವಾಗಲಿ ಎಂದು ಸಂಘವನ್ನು ರಚಿಸಿದರು. ಇದರಿಂದ ನಾವು ಮಕ್ಕಳ ಹೆಸರಿನಲ್ಲಿ ಉಳಿತಾಯದ ಮೂಲಕ ಹಣವನ್ನು ಕೂಡಿತ್ತಿದ್ದೇವೆ.ನಮಗೆ ಎಲ್ಲಾ ತರಬೇತಿಗಳನ್ನು ನೀಡಿದ್ದಾರೆ. ನಮಗೆ ಉದ್ಯೋಗದಲ್ಲಿ ತೊಡಗಬೇಕು ಎಂಬ ಆಸಕ್ತಿ ಇದ್ದರು ಆರ್ಥಿಕವಾಗಿ ಸಹಾಯ ಮಾಡುವವರು ಇರಲಿಲ್ಲ ಆದರೆ ಈ ಸಂಘದಿಂದ ಲೋನ್ ಪಡೆದುಕೊಂಡು ಉದ್ಯೋಗದಲ್ಲಿ ತೊಡಗುವಂತೆ ಮಾಡಿದ್ದಾರೆ.ನಮ್ಮ ಮಕ್ಕಳಿಗೆ ತುಂಬಾ ಅನುಕೂಲವಾಗಿದೆ ಇಷ್ಟೆಲ್ಲ ಮಾಹಿತಿ ನೀಡಿ ಸಹಾಯ ಮಾಡುತ್ತಿರುವ ಡೀಲ್ ಫೌಂಡೇಶನ್ ಸಂಸ್ಥೆಗೂ ಹಾಗೂ ರೇಣುಕಾ ಅವರಿಗೂ ನಮ್ಮ ಸಂಘದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಹೀಗೆ ಇನ್ನು ಹೆಚ್ಚಿನ ಪ್ರೋತ್ಸಾಹ,ಸಹಕಾರ ನೀಡಲಿ ಎಂದು ಕೇಳಿಕೊಳ್ಳುತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗಾಗಿ ಪ್ರತಿ ತಾಲೂಕಿನಲ್ಲಿ ಕಾರ್ಯನಿರ್ವಹಿಸಿ ತರಬೇತಿಗಳನ್ನು ಆರ್ಥಿಕವಾಗಿ ವಿಕಲಚೇತನರನ್ನು ಉದ್ಯೋಗದಲ್ಲಿ ತೊಡಗುವಂತೆ ಮಾಡಿ ಈ ಸಮಾಜದಲ್ಲಿ ವಿಕಲಚೇತನರು ತಮ್ಮನ್ನು ತಾವು ಗುರುತಿಸಿಕೊಳ್ಳುವಂತೆ ಮಾಡುತ್ತಿದ್ದಾರೆ.ಇನ್ನೂ ಹೆಚ್ಚಿನ ಮಟ್ಟದಲ್ಲಿ ವಿಕಲಚೇತನರಿಗೆ ಅನುಕೂಲ ಮಾಡಿಕೊಡಲಿ ಹಾಗೂ ಇದರಿಂದ ಹೆಚ್ಚಿನ ಕೀರ್ತಿ ಗಳಿಸಲಿ ಎಂದು ಎಲ್ಲ ವಿಕಲಚೇತನರು ಹಾರೈಸುತ್ತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತೆಗೆದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

Scroll to Top