Select Page

 

ವಿಕಲಚೇತನತೆಯ ನಾಯಕತ್ವ ಮತ್ತು ಉದ್ಯಮಶೀಲತೆ ಎರಡು ಶಕ್ತಿಗಳಾಗಿದ್ದು ಅದು ವಿಕಲಚೇತನ ವ್ಯಕ್ತಿಗಳ ಜೀವನವನ್ನು ಮಾತ್ರವಲ್ಲದೆ ಸಮಾಜವನ್ನು ದೊಡ್ಡದಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.ಐತಿಹಾಸಿಕವಾಗಿ ವಿಕಲಚೇತನ ವ್ಯಕ್ತಿಗಳು ನಾಯಕತ್ವ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಒಳಗೊಂಡಂತೆ ಸಮಾಜದ ಹಲವು ಅಂಶಗಳಿಂದ ಹೊರಗಡೆ ಇಡಲಾಗಿದೆ. ಆದಾಗಿಯೂ ಇತ್ತೀಚಿನ ವರ್ಷಗಳಲ್ಲಿ ನಾಯಕತ್ವದ ಪಾತ್ರಗಳನ್ನು ತೆಗೆದುಕೊಳ್ಳಲು ಮತ್ತು ಉದ್ಯಮಶೀಲತೆಯನ್ನು ಮುಂದುವರಿಸಲು ವಿಕಲಚೇತನ ವ್ಯಕ್ತಿಗಳನ್ನು ಸಬಲೀಕರಣ ಗೊಳಿಸುವತ್ತ ಆಂದೋಲನವು ಬೆಳೆಯುತ್ತಿದೆ.ಅದರಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯು ಒಂದಾಗಿದೆ.ಇದು ವಿಕಲಚೇತನ ವ್ಯಕ್ತಿಗಳ ವಿಶಿಷ್ಟ ಕೌಶಲ್ಯ ಮತ್ತು ದೃಷ್ಟಿಕೋನಗಳನ್ನು ಅಭಿವೃದ್ಧಿಪಡಿಸಲು ವಿಕಲಚೇತನರಿಗೆ ಮಾರ್ಗದರ್ಶನ ನೀಡುತ್ತಿದೆ.ಜೊತೆಗೆ ವಿಕಲಚೇತನ ವ್ಯಕ್ತಿಗಳಿಗೆ ಮುನ್ನಡೆಸಲು ಅವಕಾಶ ನೀಡಿ ಅವರ ಅನುಭವ ಮತ್ತು ಜ್ಞಾನದ ಸಂಪತ್ತುವನ್ನು ಇಡೀ ಸಮಾಜ ಗುರುತಿಸುವಂತೆ ವಿಕಲಚೇತನರಿಗೆ ಪ್ರೇರೇಪಿಸುತ್ತಿದೆ. ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನ ವ್ಯಕ್ತಿಗಳ ಆಸಕ್ತಿ ಮತ್ತು ಮೌಲ್ಯಗಳಿಗೆ ಹೊಂದಿಕೊಳ್ಳುವ ವ್ಯವಹಾರಗಳನ್ನು ರಚಿಸಲು ಅವಕಾಶ ನೀಡುತ್ತಿದೆ. ಇದರಿಂದ ಅನೇಕ ವಿಕಲಚೇತನರು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.ಅದರಲ್ಲಿ ಹೇಳುವುದಾದರೆ,

ಶಿರಹಟ್ಟಿ ತಾಲೂಕಿನ ತಾರಿಕೊಪ್ಪ ಗ್ರಾಮದ ಶಂಕ್ರಪ್ಪ ಸೋಮಪ್ಪ ಲಮಾಣಿ ಇವರು ಹುಟ್ಟಿನಿಂದಲೇ ದೈಹಿಕ ವಿಕಲಚೇತನತೆಯನ್ನು ಹೊಂದಿದವರು.ಇವರ ಎಡಗಾಲು ವಿಕಲಚೇತನತೆಯನ್ನು ಹೊಂದಿದೆ. ಇವರ ಕುಟುಂಬದ ಬಗ್ಗೆ ಹೇಳುವುದಾದರೆ ತಂದೆ ಶಂಕರಪ್ಪ ತಾಯಿ ದೇವಮ್ಮ ಹಾಗೂ ನಾಲ್ಕು ಜನ ಸಹೋದರರು.ಇವರ ಬಾಲ್ಯವು ತುಂಬಾ ಬಡತನದಿಂದ ತುಂಬಿತ್ತು ಕಾರಣ ತಂದೆ ಕೂಲಿ ಕೆಲಸ ಮತ್ತು ತಾಯಿ ಹಣ್ಣುಗಳ ವ್ಯಾಪಾರ ಮಾಡಿ ಕುಟುಂಬವನ್ನು ನಡೆಸುತ್ತಿದ್ದರು.ಇವರ ಸಹೋದರರು ಯಾವುದೇ ತೊಂದರೆಯನ್ನು ಹೊಂದಿರುವುದಿಲ್ಲ ಶಂಕ್ರಪ್ಪ ಒಬ್ಬರೇ ಪೋಲಿಯೋ ಕಾರಣದಿಂದಾಗಿ ಎಡಗಾಲು ಸ್ವಾದಿನ ಕಳೆದುಕೊಂಡು ವಿಕಲಚೇತನತೆಯನ್ನು ಹೊಂದಿದ್ದರು.ಇದರಿಂದ ತಂದೆ ತಾಯಿ ಹಾಗೂ ಕುಟುಂಬಕ್ಕೆ ಬೇಸರವಾಯಿತು ಆದರೂ ಅದರಲ್ಲಿಯೇ ಶಂಕ್ರಪ್ಪ ಅವರು ಶಾಲೆಗೆ ಹೋಗುತ್ತಿದ್ದರು.ಮನೆಯಲ್ಲಿ ಕಿತ್ತು ತಿನ್ನುವ ಬಡತನ ಶಾಲೆಗೆ ಹೋಗುವಾಗ ಹಾಕಿಕೊಳ್ಳಲು ಬಟ್ಟೆಯೂ ಕೂಡ ಇರಲಿಲ್ಲ ಇದರಿಂದ ಬೇಸರವಾಗಿ 9ನೇ ತರಗತಿಯ ವರೆಗೆ ಶಾಲೆಯನ್ನು ಬಿಟ್ಟು ತಾಯಿಯ ಜೊತೆಗೆ ಹಣ್ಣು ವ್ಯಾಪಾರ ಮಾಡಲು ಹೋಗುತ್ತಿದ್ದರು.

ಹೀಗೆ ಅವರ ಕುಟುಂಬವು ಸಾಗುತ್ತಿತ್ತು.ದಿನ ಕಳೆದ ಹಾಗೆ ಸಹೋದರರು ಮದುವೆ ಮಾಡಿದರು ಸ್ವಲ್ಪ ದಿನಗಳ ನಂತರ ಅವರೆಲ್ಲರೂ ಬೇರೆ ಮನೆ ಮಾಡಿ ಅವರ ಜೀವನ ನೋಡಿಕೊಂಡರು. ಕೊನೆಗೆ ಶಂಕ್ರಪ್ಪ ಒಬ್ಬರೇ ಮನೆಯಲ್ಲಿ ತಂದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದರು.ಹೀಗೆ ಇವರ ಪುಟ್ಟ ಕುಟುಂಬ ಸಾಗುತ್ತಿತ್ತು ನಂತರ ದೇವರ ಆಶೀರ್ವಾದದಿಂದ ಶಂಕ್ರಪ್ಪ ಈವರೆಗೂ ಮದುವೆಯಾಯಿತು. ಆಗ ಕುಟುಂಬ ನಡೆಸಲು ಕಷ್ಟವಾಯಿತು ಅವರ ಹೆಂಡತಿ ಮತ್ತು ತಾಯಿಯು ಸಲಹೆ ನೀಡಿದರು.ಹೀಗೆ ಕೂಲಿ ಕೆಲಸ ಮಾಡಿ ಕುಟುಂಬ ನಡೆಸುವುದು ಕಷ್ಟ ನಿನ್ನದೇ ಆದ ವ್ಯಾಪಾರವನ್ನು ಮಾಡು ಅದು ಪುಟ್ಟದಾಗಿ ಅಂಗಡಿಯನ್ನು ಹಾಕಿ ಮನೆಯಲ್ಲಿ ವ್ಯಾಪಾರ ಮಾಡು ನಾವು ಕೂಡ ಸಹಾಯ ಮಾಡುತ್ತೇವೆ ಹಾಗೂ ನಿನಗೂ ಅನುಕೂಲವಾಗುತ್ತದೆ ಎಂದು ಹೇಳಿದರು.ಆಗ ಯೋಚಿಸಿ ಸಾಲ ಮಾಡಿ ಮನೆಯ ಮುಂದೆ ಪುಟ್ಟದಾಗಿ ಡಬ್ಬಿ ಅಂಗಡಿಯನ್ನು ಹಾಕಿ ಕಿರಾಣಿ ವ್ಯಾಪಾರ ಆರಂಭಿಸಿದರು.ದಿನ ಕಳೆದ ಹಾಗೆ ಇವರ ವ್ಯಾಪಾರ ಚೆನ್ನಾಗಿ ಆಯಿತು. ನಂತರ ಅವರ ಮನೆ ಹತ್ತಿರ ಯಾವುದೇ ಜೆರಾಕ್ಸ್ ಅಂಗಡಿ ಇರಲಿಲ್ಲ ಶಂಕ್ರಪ್ಪ ಅವರು ಯೋಚಿಸಿ ಮೊದಲು ಸಾಲ ತೀರಿಸಿ ಕುಡಿಟ್ಟ ಹಣದಲ್ಲಿ ಜೆರಾಕ್ಸ್ ಮಶೀನ್ ತೆಗೆದುಕೊಂಡು ಆ ಅಂಗಡಿಯಲ್ಲಿ ಜೆರಾಕ್ಸ್, ಲ್ಯಾಮಿನೇಷನ್ ಈ ರೀತಿ ಕೆಲಸವನ್ನು ಆರಂಭಿಸಿದರು. ಇದರಿಂದ ಕಿರಾಣಿ ಅಂಗಡಿ ಜೊತೆಗೆ ಜೆರಾಕ್ಸ್ ಮಾಡಿಕೊಡುತ್ತಾ ದಿನಕ್ಕೆ 500/- ರಿಂದ 600/- ಲಾಭವನ್ನು ಮಾಡುತ್ತಿದ್ದಾರೆ.

ಈ ಕಿರಾಣಿ ಅಂಗಡಿಯನ್ನು ಅವರ ಹೆಂಡತಿಯ ಸಹಯೋಗದಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ ಜೊತೆಗೆ ಇದು ಅಲ್ಲದೆ ಮೀನು ವ್ಯಾಪಾರ ಕೂಡ ಆರಂಭಿಸಿಕೊಂಡರು.ಅದು ಹಮ್ಮಗಿ ಯಿಂದ ಮೀನು ತರಿಸಿಕೊಂಡು ತಮ್ಮ ಊರಿನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.ಇದರಿಂದ ಒಂದು ಕೆಜಿಗೆ ನೂರು ರೂಪಾಯಿ ಲಾಭವನ್ನು ಗಳಿಸುತ್ತಿದ್ದಾರೆ.ತಂದೆ ತಾಯಿ ಆಶೀರ್ವಾದದಿಂದ ಮತ್ತು ಹೆಂಡತಿಯ ಸಹಕಾರದಿಂದ ಇವರ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆ ಹೊಂದಿತು.ಶಂಕ್ರಪ್ಪ ಅವರಿಗೆ ಎರಡು ಮಕ್ಕಳೊಂದಿಗೆ ಇವರ ಕುಟುಂಬವು ಬೆಳೆಯಿತು. ಇವರ ಇನ್ನೊಂದು ಭರವಸೆ ಇವರ ಕಿರಾಣಿ ಅಂಗಡಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಿ ಅದರಲ್ಲಿ ಸ್ಟೇಷನರಿ ವ್ಯಾಪಾರ ಮಾಡುತ್ತಾ ವಿಕಲಚೇತನರಿಗೆ ಸ್ವಯಂ ಉದ್ಯೋಗ ಮಾಡಲು ಅವಕಾಶ ಕೊಡಬೇಕು ಎಂಬ ಅಭಿಲಾಷೆ ಶಂಕ್ರಪ್ಪ ಅವರದಾಗಿದೆ.ಜೊತೆಗೆ ವಿಕಲಚೇತನರ ಸ್ವಸಹಾಯ ಸಂಘ ಮಾಡಿ ಅದನ್ನು ಜಿಲ್ಲಾ ಮಟ್ಟದವರೆಗೂ ಗುರುತಿಸುವಂತೆ ಮಾಡಬೇಕು ಎಂದು ಅಲ್ಲಿರುವ 10 ಜನ ವಿಕಲಚೇತನರು ಸೇರಿ ತಮ್ಮಲ್ಲಿಯೇ ಉಳಿತಾಯವನ್ನು ಕಟ್ಟುತ್ತಿದ್ದರು.ಆದರೆ ಇದಕ್ಕೆ ಯಾವುದೇ ರೀತಿಯ ಗುರುತು ಇರಲಿಲ್ಲ. ಅದೇ ವೇಳೆಗೆ ಡೀಲ್ ಫೌಂಡೇಶನ್ ಸಂಸ್ಥೆಯ ಶಿರಹಟ್ಟಿ ತಾಲೂಕಿನ ಲವ್ಲೀ ವುಡ್ ಆಫೀಸರ್ ಆದ ರೇಖಾ ಮಡ್ಡಿ ಇವರು ದಾರಿ ತಾರಿಕೊಪ್ಪ ಪಂಚಾಯಿತಿಯಲ್ಲಿ ವಿಕಲಚೇತನರನ್ನು ಸೇರಿಸಿ ಅಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯ ವೈಖರಿಗಳ ಬಗ್ಗೆ ಮಾಹಿತಿ ನೀಡುವಾಗ ಅಲ್ಲಿ ಶಂಕ್ರಪ್ಪ ಅವರು ಕೂಡ ಭಾಗವಹಿಸಿದ್ದರು.ವಿಕಲ ಚೇತನರಿಗೆ ಸಹಾಯ ಮಾಡಬೇಕು ಎಂಬ ಆಸೆ ಹೊತ್ತ ಶಂಕ್ರಪ್ಪ ಅವರು ರೇಖಾ ಅವರನ್ನು ಭೇಟಿ ನೀಡಿ ತಾವು ರಚಿಸಿಕೊಂಡ ವಿಕಲಚೇತನರ ಗುಂಪಿನ ಬಗ್ಗೆ ಹೇಳಿದರು.ಆಗ ರೇಖಾ ಅವರು ಉಳಿತಾಯವೊಂದೇ ತುಂಬಿದರೆ ಏನು ಲಾಭ ಬರುವುದಿಲ್ಲ ಅದಕ್ಕೆ ನಿಮ್ಮ ಗುಂಪಿಗೆ ಹೆಸರಿಟ್ಟು ಬ್ಯಾಂಕ್ ನಲ್ಲಿ ಅಕೌಂಟ್ ಮಾಡಿಸಬೇಕು ಅಂದಾಗ ಮಾತ್ರ ತರಬೇತಿ ಅವಕಾಶಗಳು ನಿಮಗೆ ಸಿಗುತ್ತವೆ ಎಂದು ಹೇಳಿದರು.ಆಗ ಎಲ್ಲರೂ ಒಪ್ಪಿಕೊಂಡು “ಸೇವಾಲಾಲ್ ವಿಕಲಚೇತನರ ಸ್ವಸಹಾಯ ಸಂಘ” ಎಂದು ಹೆಸರಿಟ್ಟು ಬ್ಯಾಂಕ್ ನಲ್ಲಿ ಅಕೌಂಟ್ ಮಾಡಿ ಡೀಲ್ ಫೌಂಡೇಶನ್ ಸಂಸ್ಥೆಯಿಂದ ತರಬೇತಿಯನ್ನು ಪಡೆದುಕೊಂಡರು. ನಂತರ ರೇಖಾ ಅವರ ಸಲಹೆಯಂತೆ ಶಂಕ್ರಪ್ಪ ಅವರ ಹೆಂಡತಿಯನ್ನು ಹುಲಕೋಟಿಯ ಕೆವಿಕೆಯಲ್ಲಿ ಹುದ್ದೆಗಳ ತರಬೇತಿಗೆ ಕಳಿಸಲಾಗಿತ್ತು.

ನಂತರ ಈ ಸಂಘಕ್ಕೆ ಕೃಷಿ ಇಲಾಖೆಯಿಂದ 10,000 ಸುತ್ತುನಿಧಿ ಯನ್ನು ಕೂಡ ರೇಖಾ ಅವರು ಡೀಲ್ ಫೌಂಡೇಶನ್ ನ ಸಹಕಾರದಿಂದ ಕೊಡಿಸಲಾಗಿದೆ. ಶಂಕ್ರಪ್ಪ ಅವರು ಅದರಲ್ಲಿ 25000/- ಸಾಲವನ್ನು ಈ ಸಂಘದಿಂದ ಪಡೆದುಕೊಂಡು ಅವರ ಅಭಿಲಾಷೆಯಂತೆ ಕಿರಾಣಿ ಅಂಗಡಿಯ ಜೊತೆಗೆ ಸ್ಟೇಷನರಿ ವ್ಯಾಪಾರ,ಮೀನಿನ ವ್ಯಾಪಾರ ಇನ್ನು ಹೆಚ್ಚಿನ ಮಟ್ಟದಲ್ಲಿ ಆರಂಭಿಸಿ ಸ್ವಯಂ ಉದ್ಯೋಗ ಮಾಡುತ್ತ ಅನೇಕ ವಿಕಲಚೇತನರಿಗೆ ಸಹಾಯ ಮಾಡುತ್ತಿದ್ದಾರೆ.

ಹೀಗೆ ಅನೇಕ ವಿಕಲಚೇತನರಿಗೆ ಮಾದರಿಯಾಗಿರುವ ಶಂಕ್ರಪ್ಪ ಅವರು ಡೀಲ್ ಫೌಂಡೇಶನ್ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಅದು ಬಡತನ ಪರಿಸ್ಥಿತಿಯಿಂದ ಕೂಡಿದ್ದ ನನ್ನ ಜೀವನಕ್ಕೆ ಡೀಲ್ ಫೌಂಡೇಶನ್ ಸಂಸ್ಥೆಯು ಆಧಾರವಾಗಿ ನಿಂತಿದೆ. ಎಲ್ಲೋ ಇದ್ದ ನನ್ನನ್ನು ನಾಲ್ಕು ಜನ ಗುರುತಿಸುವಂತೆ ಮತ್ತು ಈ ಸಮಾಜದಲ್ಲಿ ವಿಕಲಚೇತನರು ಕೂಡ ಅವಕಾಶ ಸಿಕ್ಕರೆ ಏನನ್ನಾದರೂ ಸಾಧಿಸಬಲ್ಲರು ಎಂದು ಗುರುತಿಸುವಂತೆ ಡೀಲ್ ಫೌಂಡೇಶನ್ ನನಗೆ ಸಹಕಾರ ನೀಡಿದೆ.ರೇಖಾ ಅವರ ಸಲಹೆಯಂತೆ ಸ್ವಸಹಾಯ ಸಂಘ ಮಾಡಿ ಅನೇಕ ತರಬೇತಿಗಳನ್ನು ನಾನು ಮತ್ತು ನನ್ನ ಕುಟುಂಬವು ಕೂಡ ಪಾಲ್ಗೊಂಡು ತರಬೇತಿಯನ್ನು ಪಡೆದುಕೊಂಡು ಇದರಿಂದ ಆರ್ಥಿಕ ಪರಿಸ್ಥಿತಿಯು ಕೂಡ ಸುಧಾರಣೆಯಾಗಿದೆ.ಸ್ವಸಹಾಯ ಸಂಘ ಮಾಡುವುದು ಹೇಗೆ ಎಂದು ಗೊತ್ತಿರಲಿಲ್ಲ ರೇಖಾ ಅವರ ಸಹಾಯದಿಂದ ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಮಾಹಿತಿಯು ಕೂಡ ಸಿಕ್ಕಿದೆ.ಈಗ ಯಾವುದೇ ಸರ್ಕಾರದ ಅನುದಾನ, ಸೌಲಭ್ಯಗಳನ್ನು ಎದುರಿಸಿ ನಿಂತು ಕೇಳುವ ಧೈರ್ಯ ಡೀಲ್ ಫೌಂಡೇಶನ್ ಸಂಸ್ಥೆಯು ನಮ್ಮಲ್ಲಿ ತುಂಬಿದೆ ಅದರಿಂದ ರೇಖಾ ಇವರಿಗೂ ಮತ್ತು ಡೀಲ್ ಫೌಂಡೇಶನ್ ಸಂಸ್ಥೆಗೂ ನಾನು ಮತ್ತು ನನ್ನ ಕುಟುಂಬದ ಪರವಾಗಿ ಹಾಗೂ ನಮ್ಮ ಸಂಘದ ಪರವಾಗಿ ಧನ್ಯವಾದಗಳನ್ನು ಅರ್ಪಿಸಿ ಯಾವಾಗಲು ನಿಮಗೂ ಚಿರಋಣಿಯಾಗಿರುತ್ತೇವೆ ಎಂದು ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ.

ಹೀಗೆ ಡೀಲ್ ಫೌಂಡೇಶನ್ ಸಂಸ್ಥೆಯು ಮಾಡುತ್ತಿರುವ ಕಾರ್ಯ ವೈಖರಿಗಳಿಂದ ವಿಕಲಚೇತನ ಜೀವನಕ್ಕೆ ಆಧಾರವಾಗಿದೆ ಎಂದು ಹೇಳಬಹುದು.ಹೀಗೆ ಇನ್ನೂ ಅನೇಕ ವಿಕಲಚೇತನರ ಜೀವನಕ್ಕೆ ಬೆಳಕಾಗಲಿ ಇನ್ನು ಹೆಚ್ಚಿನ ಮಟ್ಟದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯ ಕೀರ್ತಿ ಬೆಳಗಲಿ ಎಂದು ಎಲ್ಲ ವಿಕಲಚೇತನರು ಹಾರೈಸುತ್ತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿದ್ದರೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

Get a report of all our on field work every month.

You have Successfully Subscribed!

Share This