ದೃಷ್ಟಿಕೋನ :
ವಿಕಲಚೇತನರ ಸಾಮರ್ಥ್ಯ ಗುರುತಿಸುವಂತಹ ಪ್ರಪಂಚದ ನಿರ್ಮಾಣ.
ಧ್ಯೇಯ :
ವಿಕಲಚೇತನರ ವ್ಯಕ್ತಿಗಳಿಗೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಮತ್ತು ಕೆಲಸವನ್ನು ನಿರ್ವಹಿಸಲು ಬದ್ಧವಾಗಿರುವುದು.
ಗುರಿ :
ಮುಂಬರುವ 2025 ರ ಇಸವಿ ದೊಳಗೆ ಗದಗ ಮತ್ತು ಹಾವೇರಿ ಜಿಲ್ಲೆಗಳಾದ್ಯಂತ 5000 ವಿಕಲಚೇತನರಿಗೆ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದು.
ಪರಿಣಾಮಗಳು :
- 239 ವಿಕಲಚೇತನರು ಮತ್ತು 129 ಮಹಿಳೆಯರು ಯಶಸ್ವಿಯಾಗಿ ವಿವಿಧ ಜೀವನೋಪಾಯ ತರಬೇತಿ ಪಡೆದಿದ್ದಾರೆ. ಸಮರ್ಪಕವಾಗಿ ಜೀವನೋಪಾಯದ ಉದ್ಯೋಗದಲ್ಲಿ 69 ವಿಕಲಚೇತನರು ಸೇರಿದಂತೆ ಪೂರ್ಣಾವಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
- ಗದಗ ಜಿಲ್ಲೆಯ ಡಂಬಳ ಹೋಬಳಿಯಾದ್ಯಂತ 350 ವಿಕಲಚೇತನರು ಕೆವಿಜಿ ಬ್ಯಾಂಕ್ ಸಹಯೋಗದೊಂದಿಗೆ ಹಣಕಾಸಿನ ವ್ಯವಸ್ಥೆಯ ಮೂಲಕ ಬೆಂಬಲಿತರಾಗಿದ್ದಾರೆ.
- ಮುಂಡರಗಿ ತಾಲೂಕಿನಾದ್ಯಂತ 540 ಜನರಿಗೆ ಕೃಷಿ ವಿಜ್ಞಾನ ಕೇಂದ್ರ ಗದಗ ಕೃಷಿ ವಿಶ್ವವಿದ್ಯಾಲಯ ಧಾರವಾಡ ಸಹಯೋಗದೊಂದಿಗೆ ಜೀವನೋಪಾಯದ ಕೌಶಲ್ಯತೆ ತರಬೇತಿಯನ್ನು ನೀಡಲಾಗಿದೆ.
- ಪ್ರಾಯೋಗಿಕವಾಗಿ ಮಾದರಿ ಸಮಗ್ರ ಕೃಷಿ ಪದ್ಧತಿ ಮತ್ತು ಸುಸ್ಥಿರ ಗ್ರಾಮೀಣ ಜೀವನೋಪಾಯ ವನ್ನು ಸ್ಥಾಪಿಸಲಾಗಿದೆ.
- ವಿಕಲಚೇತನರಿಗೆ ಆರ್ಥಿಕ ಮತ್ತು ಸಾಕ್ಷರತೆ ಯೋಜನೆಗಳನ್ನು ರೂಪಿಸುವುದು.
- ವಿಕಲಚೇತನರ ಮತ್ತು ಮಹಿಳಾ ಸ್ವಸಹಾಯ ಗುಂಪುಗಳು ಸ್ಥಾಪಿಸಿದ ಎಂಎಸ್ಎಂಇ ವಿವರಗಳನ್ನು ಸಶಕ್ತಗೊಳಿಸಲು ಸ್ಥಳ ಆಧಾರಿತ ಮೊಬೈಲ್ ಮಾರಾಟ ಮತ್ತು ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವುದು.